ಸಾವಿರ ಭಾಷೆ ಸಾವಿರ ವೇಷ

ಸಾವಿರ ಭಾಷೆ ಸಾವಿರ ವೇಷ
ನಮ್ಮದು ಭಾರತ ದೇಶ
ಸೌಹಾರ್ದದ ಹಾಲ್ಗಡಲಿನ ಒಳಗೆ
ಯಾತಕೊ ಕೋಮು ದ್ವೇಷ //ಪ//

ಸ್ವತಂತ್ರ ಭಾರತಕರವತ್ತು
ಅಭಿವೃದ್ಧಿಯ ರಥ ಚುರುಕಲ್ಲ
ಉಳ್ಳವರಿಗೆ ಆಕಾಶ ಸಲೀಸು
ಸರ್ವೋದಯಕೆಡೆ ಇಲ್ಲಿಲ್ಲ
ಇದು ಯಾಕೆ ಯಾರಿಗೆ ಶೋಭೆ
ಕಾಣದೆ ಕಣ್ಣಿಗೆ ಆದೆವೆ ಗೂಬೆ

ವಿಶಾಲ ಭಾರತ ವಿಶಾಲವೆ
ಆದರು ಸಮಾಜ ಕಿಷ್ಕಿಂದೆ
ನಿಸರ್ಗ ಸಂಪತ್ತಿಗೆ ಬರವೆ?
ಆದರು ಉಣ್ಣಲು ದಾರಿದ್ರ್ಯವೆ
ಇಂತಹ ವೈರುಧ್ಯ ಇದೆ ಯಾಕೆ?
ಒಳಗಿರುವ ತಿಳುವಳಿಕೆ ಸಾಕೆ?

ಹೇಳುವೆವು ಭಾರತವು ಮಹಾನ್
ಸೊರಗಿದ್ದರೂ ದೇಹ
ಇದರ ನಡುವೆಯೆ ಹೊಸ ವಿದ್ವೇಷ
ಕಳಚುತಿಲ್ಲ ನಾವ್ ಇದರ ವೇಷ
ಭದ್ರ ಭಾರತವ ಕಟ್ಟುವಲಿ
ಹೊಸ ಇತಿಹಾಸವ ಬರೆಯುವಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಚಿಕ್ಕ ತಂದೆ
Next post ನನ್ನ ಅಂಬೋಣ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys